ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದ ಹಣಕಾಸಿನ ಸ್ಥಿತಿ ಸುಧಾರಿಸಲು ಆನ್‌ಲೈನ್‌ ದೇಣಿಗೆಗೆ ಮೊರೆಹೋದ ಕಾಂಗ್ರೆಸ್

Last Updated 25 ಮೇ 2018, 10:10 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ನ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಲು ಪಕ್ಷದ ಮುಖಂಡ ಶಶಿ ತರೂರ್‌ ತೋರಿದ ದೇಣಿಗೆ ಸಂಗ್ರಹಿಸುವ ಮಾರ್ಗವನ್ನು ಪಕ್ಷ ಅನುಸರಿಸಿದೆ.

ಶಶಿ ತರೂರ್‌ ಬುಧವಾರ ನೀಡಿದ ಹೇಳಿಕೆ ತರುವಾಯ ಜನರಿಂದ ಆನ್‌ಲೈನ್‌ ಮೂಲಕ ದೇಣಿಗೆ ಸಂಗ್ರಹಿಸಲು(ಕ್ರೌಡ್‌ ಫಂಡಿಂಗ್‌) ಮುಂದಾಗಿದೆ. ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ, ‘ಕಾಂಗ್ರೆಸ್‌ಗೆ ನಿಮ್ಮ ಬೆಂಬಲ ಮತ್ತು ಸಹಾಯ ಬೇಕಿದೆ. 70 ವರ್ಷಗಳಿಂದ ಹೆಮ್ಮೆಯಿಂದ ವಿಕಸನವಾಗುತ್ತ ಬಂದಿರುವ ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ದೇಣಿಗೆ ನೀಡುವ ಮೂಲಕ ಸಹಕರಿಸಿ’ ಎಂದು ಕರೆ ನೀಡಲಾಗಿದೆ. ಅದರೊಂದಿಗೆ ಆನ್‌ಲೈನ್‌ ಮೂಲಕ ದೇಣಿಗೆ ನೀಡುವ ಲಿಂಕ್‌ ಸಹ ಲಗತ್ತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT