ಶಶಿ ತರೂರ್ ಬುಧವಾರ ನೀಡಿದ ಹೇಳಿಕೆ ತರುವಾಯ ಜನರಿಂದ ಆನ್ಲೈನ್ ಮೂಲಕ ದೇಣಿಗೆ ಸಂಗ್ರಹಿಸಲು(ಕ್ರೌಡ್ ಫಂಡಿಂಗ್) ಮುಂದಾಗಿದೆ. ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ, ‘ಕಾಂಗ್ರೆಸ್ಗೆ ನಿಮ್ಮ ಬೆಂಬಲ ಮತ್ತು ಸಹಾಯ ಬೇಕಿದೆ. 70 ವರ್ಷಗಳಿಂದ ಹೆಮ್ಮೆಯಿಂದ ವಿಕಸನವಾಗುತ್ತ ಬಂದಿರುವ ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ದೇಣಿಗೆ ನೀಡುವ ಮೂಲಕ ಸಹಕರಿಸಿ’ ಎಂದು ಕರೆ ನೀಡಲಾಗಿದೆ. ಅದರೊಂದಿಗೆ ಆನ್ಲೈನ್ ಮೂಲಕ ದೇಣಿಗೆ ನೀಡುವ ಲಿಂಕ್ ಸಹ ಲಗತ್ತಿಸಲಾಗಿದೆ.