ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಲಕೇರಿ ಯಾವತ್ತಿಗೂ ನೀರಿನ ಸಮಸ್ಯೆಯನ್ನು ಎದುರಿಸುತ್ತಲಿದೆ. ಬಿಂಜಲಬಾವಿ, ಹುಣಶ್ಯಾಳ, ಬೆಕಿನಾಳ, ರಾಂಪೂರ, ಬಿ.ಬಿ.ಇಂಗಳಗಿ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ಹಳ್ಳಿಗಳು. ಕಲಕೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ₹80 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ ಕುದರಗೊಂಡ ಕೆರೆಯಲ್ಲಿ ತೆರೆದ ಬಾವಿ ನಿರ್ಮಾಣ ಮಾಡಲಾಗಿದೆ. ಇದರಿಂದ ತಿಳಗೂಳ, ಕೆರೂಟಗಿ ಗ್ರಾಮಗಳಿಗೆ ಅನುಕೂಲವಾಯಿತು. ಬೇಸಿಗೆಯಲ್ಲಿ ಕೆರೆ ಒಣಗುತ್ತಿದ್ದಂತೆ ಈ ಬಾವಿ ಕೂಡ ಖಾಲಿ ಆಗುತ್ತವೆ.