ಈಗಾಗಲೇ ಸಾಕಷ್ಟು ಕಡೆ ಬೆಳೆಗಳು ಹಾನಿಯಾಗಿದ್ದು, ಮರಗಳು ಧರೆಗೆ ಉರುಳುತ್ತಿರುವುದು ವರದಿಯಾಗಿದೆ. ಕೃಷಿ ಕಾರ್ಯಕ್ಕೆ ಸಿದ್ಧತೆಯನ್ನೂ ಮಾಡಿಕೊಳ್ಳಲು ಬಿಡದಂತೆ ಮಳೆ ಅಬ್ಬರಿಸುತ್ತಿದೆ. ಮುಂಗಾರು ಪೂರ್ವ ಬಿತ್ತನೆ ಗುರಿ ಭಾಗಶಃ ಪೂರ್ಣಗೊಳ್ಳುತ್ತಿದ್ದು, ಎಳ್ಳು, ಅಲಸಂದೆ, ತೊಗರಿ ಹಾಗೂ ಜೋಳ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.