‘ಮೊದಲು ಮನುಷ್ಯನಾಗಿ. ಆನಂತರ ಡಾಕ್ಟರ್, ಎಂಜಿನಿಯರ್, ವಕೀಲರಾಗಿ. ಮನೆಗೆ ಬಂದವರನ್ನು ನಗುನಗುತ್ತಾ ಮಾತನಾಡಿಸಿ. ತುಳುನಾಡಿನವರು ಎಂದರೆ ನಗುತ್ತಾ ಇರುತ್ತಾರೆ ಎನ್ನುವುದು ಎಂದಿಗೂ ನಮ್ಮ ಅಸ್ಮಿತೆಯಾಗಿ ಉಳಿಯಬೇಕು. ಕೆಲವರ ಮನೆಗೆ ಹೋದರೆ ‘ಕಾಫಿ ಕುಡಿದು ಬಂದಿದ್ದೀರಿ ಅಲ್ವೇ? ಎನ್ನುತ್ತಾರೆ. ಇನ್ನು ಕೆಲವರು ‘ಅರ್ಧ ಕಾಫಿ ತಗೊಳಿ’ ಎನ್ನುತ್ತಾರೆ’ ಎಂದು ಹಾಸ್ಯ ಮಾಡುವ ಮೂಲಕ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.