‘ಪ್ರಜಾವಾಣಿ’ ಪತ್ರಿಕೆಯ ಶೈಕ್ಷಣಿಕ ನೆರವು ನಿಧಿಯು ನನ್ನ ಶೈಕ್ಷಣಿಕ ಬದುಕಿಗೆ ಆಧಾರ ಸ್ತಂಭವಾಯಿತು. ಕಷ್ಟ ಕಾಲದಲ್ಲಿ ಪತ್ರಿಕೆಯು ನೀಡಿದ ಹಣಕಾಸು ನೆರವಿನಿಂದ ಬಂಗಾರಪೇಟೆ ಪಟ್ಟಣದ ಎಸ್ಡಿಸಿ ಕಾಲೇಜಿಗೆ ಸೇರಿ ಶಿಕ್ಷಣ ಮುಂದುವರಿಸಿದ್ದೇನೆ. ಪ್ರತಿಭಾವಂತರನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿರುವ ಪತ್ರಿಕೆಯ ಸಮಾಜಮುಖಿ ಪ್ರಯತ್ನ ಶ್ಲಾಘನೀಯ.