ಅರಣ್ಯದಂಚಿನ ಗ್ರಾಮಗಳಾದ ಸುಳಗೋಡು, ಕೋಗಿಲವಾಡಿ, ಚೌತಿ, ಕಾಳೇತಿಮ್ಮನಹಳ್ಳಿ, ಬೇಗೂರು ಮತ್ತಿತರರ ಗ್ರಾಮಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆ-ಕಟ್ಟೆಗಳಲ್ಲಿ ನೀರು ನಿಂತಿದ್ದು ರೈತರಲ್ಲಿ ಸಂತಸ ಮೂಡಿದೆ. ಆದರೆ, ಕೆಲವು ಜಮೀನಿನಲ್ಲಿ ನೀರು ನಿಂತಿದ್ದು ಶುಂಠಿ, ಮುಸುಕಿನ ಜೋಳದ ಬೆಳೆ ಕೊಳೆಯುವ ಭೀತಿ ಎದುರಾಗಿದೆ.