ಬೆಳೆಗಳಿಗೆ ಅನುಕೂಲ: ಈಗ ಬೀಳುತ್ತಿರುವ ಮಳೆಯು ಬಹುತೇಕ ಬೆಳೆಗಳಿಗೆ ಸಹಕಾರಿಯಾಗಿದೆ. ಸ್ಥಳೀಯ ಜೋಳ ಬಿತ್ತಿದ್ದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಜಿಲ್ಲೆಯ ಮಳೆಯಾಶ್ರಿತ ಭೂಮಿಯಲ್ಲಿ ಈ ಬೆಳೆಯನ್ನೇ ಅಧಿಕ ಮಂದಿ ಬಿತ್ತನೆ ಮಾಡಿದ್ದಾರೆ. ಉಳಿದಂತೆ, ತೊಗರಿ, ಹೆಸರು, ಅಲಸಂದೆ, ಉದ್ದು ಬೆಳೆಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಗುಂಡ್ಲುಪೇಟೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೆಲಗಡಲೆ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ರೈತರು ಬಿತ್ತನೆ ಮಾಡಿದ್ದಾರೆ. ಇವು ಸಹ ಸೊಂಪಾಗಿ ಒಳ್ಳೆಯ ಇಳುವರಿ ಕೊಡಲು ಮಳೆಯು ಸಹಕಾರಿಯಾಗಿದೆ. ಯಾವಾಗಲೂ ಮುಂಗಾರು ಪ್ರವೇಶದ ನಂತರ ಬಿತ್ತನೆ ಪ್ರಮಾಣದಲ್ಲಿ ಏರಿಕೆಯಾಗುತ್ತಿತ್ತು. ಇದೀಗ ಮುಂಗಾರು ಪೂರ್ವದಲ್ಲೇ ಜಿಲ್ಲೆಯ ಶೇ 32.96ರಷ್ಟು ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದೆ.