ವಿವಾದಿತ ಗಣಿ ಪ್ರದೇಶವಾದ ತುಮಟಿ, ಬೆಳಗಲ್ಲು, ಸಿದ್ದಾಪುರ ಸೇರಿದಂತೆ ವಿವಿಧೆಡೆ ತಂಡ ಭೇಟಿ ನೀಡಿ ಪರಿಶೀಲಿಸಿತು. ರಾಜ್ಯದ ಗಡಿ ನಾಶ ಮಾಡಿ ಗಣಿಗಾರಿಕೆ ನಡೆಸಿದೆ ಎಂಬ ಆರೋಪ ಓಬಳಾಪುರಂ ಗಣಿ ಕಂಪನಿ ಮೇಲಿದೆ. ಹಾಗಾಗಿ ಸುಪ್ರೀಂ ಕೋರ್ಟ್ ಗಣಿ ಗಡಿ ಸಮೀಕ್ಷೆಗೆ 2013ರಲ್ಲಿ ಆದೇಶಿಸಿತ್ತು.
ಬಳಿಕ 2017ರ ಡಿ.7ರಂದು ಮತ್ತೊಂದು ಆದೇಶ ಹೊರಡಿಸಿ, 12 ವಾರಗಳ ಗಡುವು ನೀಡಿತ್ತು.