‘ಅಕ್ಷರ ಬಂಡಿ’ಗೆ ಚಾಲನೆ: ಕೆಎಸ್ಆರ್ಟಿಸಿ ಮಯೂರಿ ಗಾರ್ಡನ್ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಕೆಎಸ್ಆರ್ಟಿಸಿ) ಮಕ್ಕಳ ದಾಖಲಾತಿ ಕುರಿತು ಜಾಗೃತಿ ಮೂಡಿಸುವ ಅಂಗವಾಗಿ ಅಕ್ಷರ ಮಾಲೆಯ ’ಅಕ್ಷರ ಬಂಡಿ’ ಯಾತ್ರೆಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ಈ ಬಂಡಿ, ಶಾಲೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಗುರುನಾಥ ನಾಯ್ಕೋಡಿ, ಶಾಲಾ ಸಿಬ್ಬಂದಿ ಸಿ.ಎನ್. ಕರನಂದಿ, ಸಿ.ಬಿ. ಗಿರಿಜಾಕುಮಾರಿ, ಎಲ್.ಒ. ಬೆಣಗಿ, ಜಿ. ಮಾರ್ಥಮ್ಮಾ, ಎಂ.ಬಿ. ಸತ್ತಿಗೇರಿ, ಎಂ.ಸಿ. ಕ್ಷತ್ರಿಯವರ, ಪಿ.ಎಚ್. ದಾಸರ ಹಾಗೂ ಆರ್.ಎಚ್. ಕೆಳಗೇರಿ ಇದ್ದರು.