ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಒಬ್ಬ ಹಿಂದಿ ಶಿಕ್ಷಕರಿದ್ದರೂ ಹೆಚ್ಚುವರಿ ಎಂದು ಪರಿಗಣಿಸಲು ಮುಂದಾಗಿರುವುದು ಜಗತ್ತಿನ ದೊಡ್ಡ ಮೂರ್ಖತನ. ಶಿಕ್ಷಣ ಇಲಾಖೆಯಲ್ಲಿ ಶೇ 95ರಷ್ಟು ಮಂದಿ ಅಂತಹವರೇ ಇದ್ದಾರೆ. ಹೇಳಿದ್ದನ್ನು ಕೇಳುವಷ್ಟೂತಿಳವಳಿಕೆ ಇಲ್ಲ. ಅವರನ್ನು ಸರಿ ಮಾಡದಿದ್ದರೆ ಇಲಾಖೆಯನ್ನು ಸರ್ವನಾಶ ಮಾಡ್ತಾರೆ ಎಂದು ನಾನು ಸಚಿವರಿಗೆ ಎಚ್ಚರಿಕೆ ನೀಡಿದ್ದೇನೆ’ ಎಂದು ಹೇಳಿದರು.