ಕಣದಲ್ಲಿ ಐದಾರು ಮಂದಿ ಇರುತ್ತಾರೆ. ಅವರಲ್ಲಿ ಉತ್ತಮರು ಅನ್ನಿಸಿದವರಿಗೆ ಮತ ಚಲಾಯಿಸಬಹುದು. ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವವರು ಬೇಡ ಎನ್ನುವುದಾದರೆ ಪಕ್ಷೇತರರು ಇರುತ್ತಾರೆ. ಅವರನ್ನು ಬೆಂಬಲಿಸಬಹುದು. ವೋಟ್ಗಳು ವೇಸ್ಟ್ ಆಗುವುದರಿಂದ ಪ್ರಜಾಪ್ರಭುತ್ವ ಗಟ್ಟಿಗೊಳ್ಳುವುದಿಲ್ಲ. ಆದಕಾರಣ ನೋಟಾ ಪ್ರಸ್ತುತತೆ ಬಗ್ಗೆ ಚುನಾವಣಾ ಆಯೋಗ ಮರುಪರಿಶೀಲನೆ ನಡೆಸುವುದು ಒಳ್ಳೆಯದು.
-ಪಿ.ಜಯವಂತ ಪೈ, ಕುಂದಾಪುರ