ಸಮಾಜಶಾಸ್ತ್ರದಲ್ಲಿ 6 ಅಂಕಗಳನ್ನು ಪಡೆದಿದ್ದ ವೈದೇಹಿಗೆ ಮರುಎಣಿಕೆಯಿಂದ ಹೆಚ್ಚುವರಿ 26 ಅಂಕಗಳು ಸಿಕ್ಕಿದ್ದರೂ ಉತ್ತೀರ್ಣರಾಗುವ ಅದೃಷ್ಟ ಒಲಿದಿಲ್ಲ. ಕನ್ನಡದಲ್ಲಿ 62 ಅಂಕಗಳನ್ನು ಪಡೆದಿದ್ದ ಅಕ್ಷಯ್ಗೆ ಮರು ಎಣಿಕೆಯಲ್ಲಿ 26 ಅಂಕಗಳು ಹೆಚ್ಚಿಗೆ ದೊರೆತಿವೆ. ಗಣಿತದಲ್ಲಿ 97 ಅಂಕಗಳನ್ನು ಪಡೆದಿದ್ದ ಶ್ರೇಯಾಗೆ ಮರು ಎಣಿಕೆಯಿಂದ ನೂರಕ್ಕೆ ನೂರು ಅಂಕಗಳು ಲಭಿಸಿದೆ. ಸಂಗಬಸವ ಎನ್ನುವ ವಿದ್ಯಾರ್ಥಿಗೆ ಗಣಿತದಲ್ಲಿ ಕೇವಲ 24 ಅಂಕಗಳು ಸಿಕ್ಕಿದ್ದು, ಮರು ಎಣಿಕೆಯಿಂದ ಹೆಚ್ಚುವರಿ 22 ಅಂಕಗಳು ಬಂದಿವೆ.