‘ಇಲ್ಲಿ 20ಕ್ಕೂ ಹೆಚ್ಚು ಮನೆಗಳಿವೆ. ಇವರಿಗೆ ನೀರು ಪೂರೈಸಲು ವಿವಿಧ 5 ಕಡೆ ನೀರಿನ ಗುಮ್ಮಿ ಸ್ಥಾಪಿಸಲಾಗಿದೆ. ಆದರೆ, ಇವುಗಳಲ್ಲಿ ಎರಡರಲ್ಲಿ ಮಾತ್ರ ನೀರು ದೊರೆಯುತ್ತವೆ. ಉಳಿದ ಗುಮ್ಮಿಗಳು ಒಣಗಿವೆ. ಜತೆಗೆ ಗ್ರಾಮದಲ್ಲಿ ಅಲ್ಲಲ್ಲಿ ನೀರಿನ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೆ, ಇವುಗಳಲ್ಲಿ ಒಮ್ಮೆಯೂ ನೀರು ಬಂದಿಲ್ಲ’ ಎಂಬುದು ಮುಖಂಡರಾದ ರಂಗನಾಥ ಮತ್ತು ಕೃಷ್ಣಾರೆಡ್ಡಿ ದೂರು.