ವಿಶ್ವ ಕ್ಯಾಥೊಲಿಕ್ ಗುರುಗಳಾದ ಪೋಪ್ ಫ್ರಾನ್ಸಿಸ್ ಅವರ ಆಹ್ವಾನದ ಮೇರೆಗೆ ಇವರು ಅಲ್ಲಿಗೆ ಭೇಟಿ ನೀಡಿದ್ದರು. ಸ್ವಾಮಿ ನಿರ್ಭಯಾನಂದಜೀ, ವೀರೇಶಾನಂದಜೀ, ಪರಮಾನಂದಜೀ ಅವರು ಪೋಪ್ ಅವರ ನಿವಾಸದಲ್ಲಿ ವೇದಘೋಷ ಮಾಡಿದರು. ಬಳಿಕ ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಮೀಜಿಯವರು ಸನ್ಮಾನಿಸಿದರು. ಸನ್ಮಾನಕ್ಕೆ ಪೋಪ್ ಅವರು ಕೃತಜ್ಞತೆ ಸಲ್ಲಿಸಿದರು.