‘ಜಮೀನು ಕಡಿಮೆ ಇದೆ. ಇಷ್ಟರಲ್ಲಿ ಎರಡೂ ಕಡೆ ದಾಯ ಮಾಡಿ ಬಿತ್ತನೆ ಮಾಡಿದಲ್ಲಿ ಕಡಿಮೆ ಇಳುವರಿ ಆಗುತ್ತದೆ. ಆದ್ದರಿಂದ ಒಂದು ಕಡೆ ದೊಡ್ಡ ಕುಂಟೆ ದಾಯದಲ್ಲಿ ಸಾಲು ಮಾಡಿ. ಅದರಲ್ಲಿ ಒಂದೂವರೆ ಅಡಿಯಿಂದ ಎರಡು ಅಡಿಗಳಿಗೆ ಒಂದರಂತೆ ಬೀಜವನ್ನು ಬಿತ್ತನೆ ಮಾಡಿದ್ದೇವೆ. ಇದರಿಂದ ಹತ್ತಿ ಜಾಸ್ತಿ ಆಗಬಹುದು’ ಎನ್ನುತ್ತಾರೆ ರೈತರಾದ ಮಹಾಲಿಂಗಪ್ಪ, ಕದುರಪ್ಪ, ರಾಜಪ್ಪ, ಪಾಲಾಕ್ಷ.