ಇಂತಹ ಆತಂಕದ ಪರಿಸ್ಥಿತಿಯಲ್ಲಿ ನಮ್ಮ ದೇಶದ ವೈದ್ಯ ಪದ್ಧತಿಯಾದ ಆಯುರ್ವೇದದ ಗ್ರಂಥಗಳಲ್ಲಿ ತಿಳಿಸಿರುವ ಪ್ರತಿಬಂಧಕ ಉಪಾಯಗಳನ್ನು ಬಳಸಬಹುದಾಗಿದೆ. ಎಳೆಯ ಮಕ್ಕಳಿಗೆ ನೆಗಡಿ, ನ್ಯುಮೋನಿಯ ಮುಂತಾದವು ಬರದಂತೆ ವಾಯುವಿಡಂಗ (ಕ್ರಿಮಿಘ್ನ), ಅರಿಸಿನ (ವೈಜ್ಞಾನಿಕವಾಗಿ ವೈರಸ್ ಕೊಲ್ಲುವ ಗುಣ ಡೃಡಪಟ್ಟಿದೆ), ಬೇವಿನ ಎಲೆ (ತುಳಸಿ, ಬೇವುಗಳಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಲೆ ತಲಾಂತರಗಳಿಂದ ಜನರು ಗುರುತಿಸಿದ್ದಾರೆ) ಧೂಪವನ್ನು ಹಾಕುತ್ತಿದ್ದರು.