ಮೈಸೂರಿನ ಜನನಿಬಿಡ ವೃತ್ತಗಳಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಪುಟ್ಟ ಪುಟ್ಟ ಮಕ್ಕಳ ಸಂಖ್ಯೆ ಈಗ ಕಡಿಮೆಯಾಗಿದೆ. ಆದರೆ ಅನೇಕ ಮಕ್ಕಳು ಈಗ ಕೈಗಳಲ್ಲಿ ಉದ್ದುದ್ದಪೆನ್ನುಗಳನ್ನು ಹಿಡಿದು, ಸಿಗ್ನಲ್ ಲೈಟ್ಗಳಿರುವ ಸ್ಥಳಗಳಲ್ಲಿಮಾರಾಟ ಮಾಡುತ್ತಿದ್ದಾರೆ. ಸಾರ್ವಜನಿಕರು ಕನಿಕರದಿಂದ ಈ ಮಕ್ಕಳ ಕೈಗೆ ಹತ್ತು ರೂಪಾಯಿ ನೀಡಿ ಪೆನ್ ಕೊಳ್ಳುತ್ತಿದ್ದಾರೆ. ಭಿಕ್ಷೆ ಬೇಡುವ ಮಕ್ಕಳ ಕೈಗೆ ಪೆನ್ ಕೊಟ್ಟು ಇವರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಖದೀಮರ ವಿಚಾರವಾಗಿ ಪೊಲೀಸರಾಗಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಾಗಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ಮಕ್ಕಳು ಅಂಗಲಾಚುವ ದೃಶ್ಯ ನೋಡಿದಾಗ ಮನಸ್ಸಿಗೆ ಬೇಸರವಾಗುತ್ತದೆ.