‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 98.24ರಷ್ಟು ಅಂಕ ಗಳಿಸಿದ್ದೆ. ಪಿಯುಸಿಯ ಪಿಸಿಎಂಬಿ ವಿಷಯಗಳಲ್ಲಿ 400ಕ್ಕೆ 399 ಅಂಕ ಗಳಿಸಿದ್ದೆ. ವೈದ್ಯಕೀಯ ಹಾಗೂ ಐಐಟಿಗೆ ಸೇರುವ ಇಚ್ಛೆ ಹೊಂದಿದ್ದೇನೆ’ ಎಂದರು. ಸಾಯಿಕುಮಾರ ತಂದೆ ಬೈಲಹೊಂಗಲ ತಾಲ್ಲೂಕಿನ ಅಮಟೂರಿನಲ್ಲಿ ಕೃಷಿಕರಾಗಿದ್ದರೆ, ತಾಯಿ ಗೃಹಿಣಿಯಾಗಿದ್ದಾರೆ. ಸಾಯಿಕುಮಾರ ತಂದೆ ರಾಜಶೇಖರ ಮಾತನಾಡಿ, ‘ಮಗ ರ್ಯಾಂಕ್ ಬಂದಿರುವುದು ಖುಷಿಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಅಮಟೂರ ಬಾಳಪ್ಪನವರ ವಂಶಸ್ಥರು ನಾವು. ಮಗನ ಓದಿಗಾಗಿಯೇ ಹುಬ್ಬಳ್ಳಿಯಲ್ಲಿ ಕಾಲೇಜಿನ ಎದುರಿನಲ್ಲಿಯೇ ಮನೆ ಮಾಡಿದ್ದೆವು. ನಮ್ಮ ಶ್ರಮ ಸಾರ್ಥಕವಾಗಿದೆ’ ಎಂದು ಹೇಳಿದರು.