ಶ್ರೀನಗರ: ಶುಕ್ರವಾರ ಶ್ರೀನಗರದ ಜಾಮಿಯ ಮಸೀದಿ ರಸ್ತೆಯಲ್ಲಿ ಜನರ ಗುಂಪೊಂದು ಆ ದಾರಿಯಾಗಿ ಬರುತ್ತಿದ್ದ ಸಿಆರ್ಪಿಎಫ್ ವಾಹನದ ಮೇಲೆ ಕಲ್ಲು ತೂರಾಟ ಮಾಡಿದೆ. ಈ ವೇಳೆ ಜನರ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸಿಆರ್ಪಿಎಫ್ ವಾಹನದ ಚಾಲಕ ಪ್ರಯತ್ನಿಸಿದಾಗ ಪ್ರತಿಭಟನಾಕಾರರಲ್ಲಿ ಓರ್ವ ವ್ಯಕ್ತಿ ಚಕ್ರದೆಡೆಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಇನ್ನೊಬ್ಬ ವ್ಯಕ್ತಿಗೆ ತೀವ್ರ ಗಾಯಗಳಾಗಿವೆ.