‘ಬಾಳಗಡಿ ಗುಡ್ಡದ ಮೇಲೆ ನಿರ್ಮಾಣಗೊಳ್ಳುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡದ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಬೆಂಗಳೂರಿನ ರೈಟ್ಸ್ ಸಂಸ್ಥೆಯವರ ಬೇಜವಾಬ್ದಾರಿಯಿಂದ ಈ ಅವಘಡ ನಡೆದಿದೆ. ಗುಡ್ಡ ಸಮತಟ್ಟುಗೊಳಿಸಲು ಜೆಸಿಬಿಯಿಂದ ಅಗೆದ ಮಣ್ಣನ್ನು ತೆರವುಗೊಳಿಸದ ಕಾರಣ ಸತತವಾಗಿ ಸುರಿದ ಮಳೆ ನೀರು ಮಣ್ಣನ್ನು ಕೊಚ್ಚಿಕೊಂಡು ಗುಡ್ಡದ ಕೆಳಭಾಗದಲ್ಲಿರುವ ಬೆನ್ನಿ ಜೋಸೆಫ್, ಅಬ್ದುಲ್ ರಜಾಕ್, ಶಿವಮ್ಮ, ಆರಿಫ್ ಮತ್ತಿತರರ ಮನೆಯಂಗಳಕ್ಕೆ ಹರಿದು ಮನೆಯೊಳಗೂ ನುಗ್ಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.