‘ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಒಟ್ಟು ಸಾಮರ್ಥ್ಯ 540 ಎಂಎಫ್ಎಸ್ (ಅಂದಾಜು 0.5 ಟಿಎಂಸಿ ). 900 ಮೀಟರ್ ಉದ್ದವಿದ್ದು, 38 ಅಡಿ ಎತ್ತರವಿದೆ. 6,350 ಎಕರೆ ಅಚ್ಚುಕಟ್ಟಿಗೆ ನೀರುಣಿಸುವ ಸಾಮರ್ಥ್ಯ ಹೊಂದಿದೆ. ಜಲಾಶಯ ತುಂಬಲು ಜಗಳೂರು, ಕೂಡ್ಲಿಗಿ ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶದ ಮಳೆ ನೀರು ಮೂಲವಾಗಿದೆ. ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ. ಅನುದಾನದ ಕೊರತೆಯಿಂದ ಹೂಳೆತ್ತಿರುವ ಕಾರ್ಯ ನಡೆದಿಲ್ಲ’ ಎಂದು ಜನಸಂಸ್ಥಾನ ಸಂಸ್ಥೆಯ ಕಾರ್ಯದರ್ಶಿ ವಿರೂಪಾಕ್ಷಪ್ಪ, ಸಿಪಿಐನ ಜಾಫರ್ ಷರೀಫ್ ದೂರುತ್ತಾರೆ.