ಲಖನೌ: ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ದೂಳಿನ ಬಿರುಗಾಳಿಗೆ 17 ಮಂದಿ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ.
ಮೊರಾದಾಬಾದ್ನಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ. ಸಾಂಭಾಲ್ನಲ್ಲಿ ಮೂವರು, ಬದೌನ್, ಮುಜಾಪ್ಫರ್ ನಗರ, ಮೀರಠ್ನಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ.
ಮರಗಳು ಉರುಳಿದ್ದರಿಂದ ಮತ್ತು ಮನೆ ಕುಸಿತದಿಂದಲೇ ಹೆಚ್ಚಿನವರು ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರದ ವಕ್ತಾರ ತಿಳಿಸಿದ್ದಾರೆ.
24 ಗಂಟೆ ಒಳಗೆ ಸಂತ್ರಸ್ತರಿಗೆ ಪರಿಹಾರ ನೀಡಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಉತ್ತರ ಪ್ರದೇಶದಲ್ಲಿ ಕಳೆದ ತಿಂಗಳಿನಿಂದ ದೂಳಿನ ಬಿರುಗಾಳಿಗೆ ಸುಮಾರು 130 ಜನರು ಮೃತಪಟ್ಟಿದ್ದಾರೆ.