ತೆಂಕ ಎರ್ಮಾಳು ಅಮೀನ್ ಮೂಲಸ್ಥಾನದ ಬಳಿ ಸುಜಿತ್ ಅವರು ತೆರಳುತ್ತಿದ್ದ ಬೈಕ್ಗೆ ಪಡುಬಿದ್ರಿಗೆ ಬರುತ್ತಿದ್ದ ರಿಕ್ಷಾ ಡಿಕ್ಕಿ ಹೊಡೆದಿತ್ತು. ಸುಜಿತ್ ಅವರು ಸಮುದ್ರ ಕಿನಾರೆಯ ಕಲ್ಲಿನ ಮೇಲೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟರು. ಅವರು ಮೀನುಗಾರರಾದ ರಮೇಶ್ ಮೆಂಡನ್, ಯಶೋಧಾ ದಂಪತಿಯ ಪುತ್ರ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.