‘ಲೋಕಸಭಾ ಕ್ಷೇತ್ರ ಮರು ವಿಂಗಡಣೆಗೂ ಮುನ್ನ ತಾಲ್ಲೂಕು ಬಳ್ಳಾರಿ ಕ್ಷೇತ್ರಕ್ಕೆ ಸೇರ್ಪಡೆಯಾಗಿತ್ತು. ದೇವಸಮುದ್ರ ಹೋಬಳಿ ಬಹುತೇಕ ಎಲ್ಲಾ ಗ್ರಾಮಗಳ ಜನ ವ್ಯಾಪಾರ ವಹಿವಾಟು, ಆರೋಗ್ಯ, ಕೂಲಿ, ಶಿಕ್ಷಣ ಎಲ್ಲದಕ್ಕೂ ಈಗಲೂ ಬಳ್ಳಾರಿಯನ್ನೇ ಅವಲಂಬಿಸಿದ್ದಾರೆ. ಬಳ್ಳಾರಿ ಜತೆ ಎಲ್ಲ ರಂಗಗಳಲ್ಲಿ ಸಂಬಂಧಗಳು ಮುಂದುವರಿದಿರುವುದರಿಂದ ಜಿಲ್ಲೆಯಲ್ಲಿರುವ ಪರೋಕ್ಷ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಹೋರಾಟ ಸಮಿತಿಯ ಜಿ.ಸಿ. ನಾಗರಾಜ್.