ಪ್ಲಾಸ್ಟಿಕ್ ಭೂತ ಭುವಿಯನ್ನು ನುಂಗುತ್ತಿದೆ, ಜಾಗತಿಕ ತಾಪಮಾನಕ್ಕೆ ಸಸಿ ನೆಡುವುದೊಂದೇ ಪರಿಹಾರ, ಪ್ಲಾಸ್ಟಿಕ್ ಮುಕ್ತಗೊಳಿಸಿ, ಪರಿಸರ ಉಳಿಸಿ ಇಂಥವೇ ಹತ್ತು ಹಲವು ಧ್ವನಿಗಳಾಗಿ ಮಾರ್ದನಿಸಿದ್ದು, ಶನಿವಾರ ಬಾಲಭವನದಲ್ಲಿ ಏರ್ಪಡಿಸಿದ್ದ ಚಿಣ್ಣರ ಚಿತ್ರಕಲೆ ಮತ್ತು ಪ್ರೌಢಶಾಲಾ ಮಕ್ಕಳ ಪ್ರಬಂಧ ಸ್ಪರ್ಧೆ.
ಪರಿಸರ ಮಾಲಿನ್ಯ ಮಂಡಳಿ ಏರ್ಪಡಿಸಿದ್ದ ಈ ಎರಡೂ ಸ್ಪರ್ಧೆಗಳ ನಡುವೆ ರಂಗ ಚಂದಿರ ತಂಡದ ಪ್ಲಾಸ್ಟಿಕಾಯಣ ಬೀದಿನಾಟಕವೂ ಪರಿಸರ ಉಳಿಸಲು ಧ್ವನಿಗೂಡಿಸಿತು.