ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 1ರಂದು ಬಳ್ಳಾರಿಯಲ್ಲಿ ಪ್ರಮುಖ ಆರೋಪಿಗಳಾದ ಬಜರಂಗ ದಳದ ಕಾರ್ಯಕರ್ತ ಸುರೇಶ್ ಮೆಂಡನ್ ಹಾಗೂ ಪ್ರಸಾದ್ ಕೊಂಡಾಡಿ ಎಂಬವರನ್ನು ಬಂಧಿಸಲಾಗಿತ್ತು. ಜೂನ್ 2 ರಂದು ಉಮೇಶ್ ಶೆಟ್ಟಿ, ರತನ್ ಎಂಬವರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಪೊಲೀಸರ ಕೈವಾಡ ಇರುವುದು ತಿಳಿದು ಬಂದಿರುವುದರಿಂದ ಪಿಎಸ್ಐ ಡಿ.ಎನ್.ಕುಮಾರ್, ಸಿಬ್ಬಂದಿ ಗೋಪಾಲ್, ಮೋಹನ್ ಕೊತ್ವಾಲ್ ಅವರನ್ನೂ ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.