‘ತಂಬಾಕದ ನಗರದ ಮುಖ್ಯರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆದು 2 ವರ್ಷವಾಗುತ್ತಿದೆ. ರಸ್ತೆಯಲ್ಲಿ ಡಾಂಬರೀಕರಣ ಮಾಡಿದ ಕುರುಹು ಸಹ ಕಾಣದಂತಾಗಿದೆ. ಮಳೆ ಬಂದರೆ ತಗ್ಗು, ಗುಂಡಿಗಳಲ್ಲಿ ನೀರು ನಿಂತು ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಇದರಿಂದ ಓಡಾಡುವುದೇ ದುಸ್ತರವಾಗುತ್ತಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರ ಪಾಡು ಹೇಳತೀರದು. ಸಂಬಂಧಪಟ್ಟವರು ಮಳೆಗಾಲ ಆರಂಭಕ್ಕೆ ಮೊದಲು ರಸ್ತೆ ದುರಸ್ತೆ ಮಾಡಿಸಿದರೆ ಉತ್ತಮ’ ಎನ್ನುತ್ತಾರೆ ತಂಬಾಕದ ನಗರದ ನಿವಾಸಿ ಮಂಜುನಾಥ ಕೋಣನತಲಿ.