‘ಯೋಗಿ ಆದಿತ್ಯನಾಥ ಅವರು ಹಿಂದೂ ಆಗಿರುವ ಕಾರಣ ಈದ್ ಹಬ್ಬ ಆಚರಿಸುವುದಿಲ್ಲ ಎಂದು ಹೇಳುತ್ತಾರೆ. ಬಿಜೆಪಿಯು ನಮ್ಮನ್ನು ಅಲ್ಪಸಂಖ್ಯಾತರ ಓಲೈಕೆ ಪಕ್ಷ ಎಂದು ಆರೋಪಿಸುತ್ತದೆ. ಆದರೆ ಮೋದಿ ಅವರು ರಮ್ಜಾನ್ ವೇಳೆ ಇಂಡೊನೇಷ್ಯಾ ಹಾಗೂ ಮಲೇಷ್ಯಾ ಪ್ರವಾಸ ಮಾಡಿದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಸ್ಲಿಮರನ್ನು ಓಲೈಸುವ ಯತ್ನವಲ್ಲವೇ ಎಂದು ಅಖಿಲೇಶ್ ಅವರು ಪ್ರಶ್ನಿಸಿದ್ದಾರೆ.