‘ಕಾಂಗ್ರೆಸ್ ಶಾಸಕರನ್ನು ಡಿ.ಕೆ. ಶಿವಕುಮಾರ್ ರೆಸಾರ್ಟಿನಲ್ಲಿ ಒಗ್ಗೂಡಿಸದೇ ಹೋಗಿದ್ದರೆ ಕನಿಷ್ಠ 20 ಶಾಸಕರು ಬಿಜೆಪಿಗೆ ಹೋಗುವವರಿದ್ದರು. ಆಗ ಇದೇ ಪರಮೇಶ್ವರ ಮಧ್ಯಾಹ್ನ 12ಕ್ಕೆ ಕೈಬೀಸಿಕೊಂಡು ರೆಸಾರ್ಟಿಗೆ ಬಂದಿದ್ದರು. ಶಿವಕುಮಾರ್ರನ್ನು ಮಂತ್ರಿ ಮಾಡಬೇಡಿ ಎನ್ನುವ ಧೈರ್ಯ ರಾಜ್ಯದ ಯಾವ ರಾಜಕಾರಣಿಗೂ ಇಲ್ಲ. ಕಳೆದ ಚುನಾವಣೆಯಲ್ಲಿ ಅವರು ಕೆಪಿಸಿಸಿ ಅಧ್ಯಕ್ಷರಾಗಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ ಕಾಂಗ್ರೆಸ್ 115 ಸ್ಥಾನದಲ್ಲಿ ಗೆಲ್ಲಬಹುದಿತ್ತು’ ಎಂದರು.