ಜಾತ್ರೆ ಸಂದರ್ಭದಲ್ಲಿ ಪಟ್ಟಣದಲ್ಲಿರುವ ಏಳು ಗ್ರಾಮದೇವತೆಗಳಾದ ಸಪ್ಲಮ್ಮ, ಮಾರೆಮ್ಮ, ಮುತ್ಯಾಲಮ್ಮ, ಕೊಲ್ಲಾಪುರ ಮಹಾಲಕ್ಷ್ಮೀ, ಸತ್ಯಮ್ಮ, ಗಂಗಮ್ಮ, ಹಿರಿಯ ದೇವತೆಯಾದ ಏಡುಗರ ಅಕ್ಕಮ್ಮ ದೇವತೆಯ ಹೆಸರಿನಲ್ಲಿ ಪ್ರತಿ ವರ್ಷ ವೈಶಾಖ ಮಾಸದಲ್ಲಿ ಎಲ್ಲಾ ಜನಾಂಗದವರು ಸೇರಿ ಜಾತ್ರೆ ಹಾಗೂ ಉಟ್ಲು ಪರಷೆ ನಡೆಸುವುದು ಪದ್ದತಿ.