‘ಅನೇಕ ಅನುಭವಿ ಮುಖಂಡರು ಇಂದು ಸಂಪುಟದಲ್ಲಿ ಇದ್ದಾರೆ. ಅನೇಕ ಹೊಸಬರು ಇದ್ದಾರೆ. ಅದರಲ್ಲಿಯೂ ಇದು ಸಮ್ಮಿಶ್ರಶ್ರಮ. ಮುಂದಿನ ದಿನಗಳಲ್ಲಿ ಒಳ್ಳೆಯ ಆಡಳಿತ ಕೊಡಲು ಬಯಸುತ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಅನೇಕರಿಗೆ ಅವಕಾಶ ಕಲ್ಪಿಸಿಕೊಡಲು ಆಗಲಿಲ್ಲ. ಕೆಲವರು ಅಸಮಾಧಾನದಿಂದ ಇದ್ದಾರೆ. ನಾವು ನಮ್ಮ ಹಂತದಲ್ಲಿ, ಹೈಕಮಾಂಡ್ ಹಂತದಲ್ಲಿ ತಿಳಿಹೇಳುವ, ಸಮಾಧಾನಪಡಿಸುವ ಕೆಲಸ ಮಾಡುತ್ತೇವೆ. ಯಾವುದೇ ಗೊಂದಲಕ್ಕೆ ಅವಕಾಶಕೊಡುವುದಿಲ್ಲ. ನಮ್ಮೆಲ್ಲರಿಗೂ ಜವಾಬ್ದಾರಿ ಇದೆ. ಅದಕ್ಕಾಗಿ ನಾವು ಇನ್ನೂ ಆರು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷದಿಂದ ಹಾಗೆಯೇ ಇಟ್ಟಿದ್ದೇವೆ. ಯಾರಿಗೆ ಪರಿಗಣಿಸಬಹುದು ಅನ್ನೋ ದೃಷ್ಟಿಯಿಂದ ಖಾಲಿ ಇಟ್ಟಿದ್ದೇವೆ. ಜೆಡಿಎಸ್ ಒಂದು ಸ್ಥಾನ ಖಾಲಿಯಿಟ್ಟಿದೆ’ ಎಂದು ಹೇಳಿದರು.