ಆದ್ದರಿಂದ ತಾಂತ್ರಿಕವಾಗಿ ಕನಿಷ್ಠ ಸರಳ ಬಹುಮತ ಪಡೆಯದ ಸಂದರ್ಭದಲ್ಲಿ ರಾಜ್ಯದ ಒಟ್ಟು ಮತದಾನದಲ್ಲಿ ಶೇಕಡಾವಾರು ‘ಅಧಿಕ ಮತ’ ಪಡೆದ ಪಕ್ಷವು ಸರ್ಕಾರ ರಚಿಸುವಂತಾಗುವಂತೆ ಕಾನೂನಿಗೆ ತಿದ್ದುಪಡಿ ತರುವುದು ಒಳಿತು. ಆ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸುವಂತಾಗಬೇಕು. ಶೇಕಡಾವಾರು ಅಧಿಕ ಮತ ಪಡೆದ ಪಕ್ಷವನ್ನು ಚುನಾಚವಣಾ ಆಯೋಗ ಮಾನ್ಯ ಮಾಡಲಿ. ಸರ್ಕಾರ ರಚನೆಗೆ ಅಗತ್ಯ ಶಾಸಕರ ಕೊರತೆಯುಂಟಾದಾಗ ಅಧಿಕ ಮತ ಪಡೆದ ಪಕ್ಷದ ಚುನಾಯಿತ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರ ಸಹಕಾರದಿಂದ ಸರ್ಕಾರ ರಚನೆಯಾಗಲಿ. ಅಧಿಕ ಮತ ಪಡೆದ ಪಕ್ಷಕ್ಕೆ ಆದ್ಯತೆಯ ಮೇಲೆ ಸರ್ಕಾರ ರಚಿಸಲು ಅವಕಾಶ ದೊರೆತರೆ, ಕುದುರೆ ವ್ಯಾಪಾರಕ್ಕೆ ಕಡಿವಾಣ ಬೀಳಬಹುದು.