ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಶಿಕ್ಷಕರಿಗೆ ಕರಪತ್ರದ ಜೊತೆಗೆ ಕವರ್ನಲ್ಲಿ ₹500 ಮುಖಬೆಲೆಯ ಎರಡು ನೋಟುಗಳನ್ನು ಇಟ್ಟು ಹಂಚುತ್ತಿದ್ದ ವೇಳೆ ಬಂಧಿಸಲಾಗಿದೆ. ಚುನಾವಣಾಧಿಕಾರಿ ಧರ್ಮರಾಜ್, ಸಹಾಯಕ ಚುನಾವಣಾಧಿಕಾರಿ ಟಿ.ಪಿ.ಸತ್ಯ ನೇತೃತ್ವದಲ್ಲಿ ಕಾರು ಪರಿಶೀಲಿಸಿ ಪ್ರಚಾರ ಸಾಮಗ್ರಿ, ₹ 40 ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ.