ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಮಹೇಶ್ ಮೇಲೆ ಅನೇಕ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಗಳ ಅಡ್ಡೆಗಳಿಗೆ ಯುವತಿಯರನ್ನು ಪೂರೈಸುತ್ತಿದ್ದ ಆರೋಪ ಈತನ ಮೇಲಿದೆ. ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯಮಟ್ಟದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಮಾನವ ಕಳ್ಳಸಾಗಾಣಿಕೆಯಲ್ಲಿ ಈತನ ಪಾತ್ರ ದೊಡ್ಡದು ಎಂದು ಪೊಲೀಸರು ಹೇಳಿದ್ದಾರೆ. ಈತ ಬೆಂಗಳೂರಿನಿಂದ ಯುವತಿಯರನ್ನು ಇಲ್ಲಿಗೆ ಕರೆಸಿ ವಿವಿಧ ಅಡ್ಡಗಳಲ್ಲಿನ ದಲ್ಲಾಳಿಗಳಿಗೆ ವಾರಕ್ಕೆ ₹ 40 ಸಾವಿರದಿಂದ ₹ 60 ಸಾವಿರ ಪಡೆದು ಸರಬರಾಜು ಮಾಡುತ್ತಿದ್ದ. ಯುವತಿಯರ ಎತ್ತರ, ದೇಹಾಕೃತಿಗೆ ಅನುಗುಣವಾಗಿ ದರ ಇರುತ್ತಿತ್ತು. ಒಂದು ವಾರದ ನಂತರ ಈ ಯುವತಿಯರನ್ನು ಬೇರೊಂದು ಅಡ್ಡಕ್ಕೆ ಹಣ ಪಡೆದು ಬಿಡುತ್ತಿದ್ದ. ಜತೆಗೆ, ಅಡ್ಡೆಗಳಲ್ಲಿರುವ ದಲ್ಲಾಳಿಗೆ ಹಣದ ಕೊರತೆ ಎದುರಾದರೆ ಅವರಿಗೆ ಸಾಲ ನೀಡುವ ವ್ಯಕ್ತಿಗಳನ್ನು ಪರಿಚಯಿಸಿ ಅವರಿಗೆ ಸಾಲ ಸಿಗುವಂತೆ ನೋಡಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.