ಬಾಗಲಕೋಟೆ: ಇಲ್ಲಿನ ರೂಪ್ಲ್ಯಾಂಡಿನ ಸಿದ್ಧಿವಿನಾಯಕ ದೇವಸ್ಥಾನದ ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ದೇವಸ್ಥಾನ ಸಮಿತಿ ಅಧ್ಯಕ್ಷ ವಾಲಿ ಅವರ ಅಧ್ಯಕ್ಷತೆಯಲ್ಲಿ ನಾಗರಿಕ ಸನ್ಮಾನ ನಡೆಸಲಾಯಿತು.
ದೇವಸ್ಥಾನಕ್ಕೆ 1 ಲಕ್ಷ ದಾನ ನೀಡಿದ್ದ ಮಲ್ಲೇಶಪ್ಪ ಜಿಗಜಿನ್ನಿ, ಪ್ರಕಾಶ್ ತಪಶೆಟ್ಟಿ, ಬಸವರಾಜ ಪಾಟೀಲ, ಎಂ.ಸಿ.ಸರನಾಯಕ, ಎಸ್.ಎಂ.ಚಿನವಾಲ ಅವರನ್ನು ಸನ್ಮಾನಿಸಲಾಯಿತು. ರೂಪ್ಲ್ಯಾಂಡಿನ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.