ವಿಶಾಲವಾದ ಮನೆಯೊಳಗೆ ಅಟ್ಟ ಏರಿ ಅಡಗಿ ಕೂತು, ಸಾಕಷ್ಟು ಕಾಡಿಸಿತು. ಆದರೂ ಸೂಕ್ತ ಸಮಯ ಕಾದು, ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಸೆರೆ ಹಿಡಿದರು. ‘ಚಿರತೆ ಸೆರೆ ಕಾರ್ಯಾಚರಣೆ ಎಷ್ಟು ಕಷ್ಟವಾಗಿತ್ತು ಎಂದರೆ ವಿಶಾಲವಾದ ಮನೆಯೊಳಗೆ ಯಾವ ಮೂಲೆಯಲ್ಲಿ ಅಡಗಿ ಕುಳಿತಿದೆ ಎಂಬುದನ್ನು ಪತ್ತೆ ಮಾಡಲು ಸಾಕಷ್ಟು ಶ್ರಮಿಸಬೇಕಾಯಿತು. ಗಂಡು ಚಿರತೆ ಸದ್ಯ ಆರೋಗ್ಯವಾಗಿದೆ. ಮನೆಯೊಳಗೆ ಓಡಾಡುವ ವೇಳೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾಕಷ್ಟು ಘಾಸಿಗೊಂಡಿದೆ. ಚಿಕಿತ್ಸೆ ನೀಡಿ ನಂತರ ಅರಣ್ಯಕ್ಕೆ ಬಿಡಲಾಗುವುದು’ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ಶಿವರಾಂ ಬಾಬು ತಿಳಿಸಿದರು.