‘ರಾಜ್ಯ ಸರ್ಕಾರ ಪಂಚಾಯತ್ ರಾಜ್ ಕಾಯ್ದೆಗೆ 2015ರ ಡಿಸೆಂಬರ್ 31ರಂದು ತಿದ್ದುಪಡಿ ಮಾಡಿದೆ. ಈ ಕುರಿತಂತೆ 2016ರ ಫೆಬ್ರುವರಿ 25ರಂದು ಗೆಜೆಟ್ ಪ್ರಕಟಣೆ ಹೊರಡಿಸಿದೆ. ಇದರ ಅನುಸಾರ, ಪಂಚಾಯ್ತಿ ಚುನಾವಣೆ ವೇಳೆ ಚುನಾವಣೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಾದ ದಿನದಿಂದ ಮುಕ್ತಾಯವಾಗುವತನಕ ಮದ್ಯದಂಗಡಿ ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಜಿಲ್ಲಾಧಿಕಾರಿ ಮೊಹರು ಹಾಕಿ ಬಂದ್ ಮಾಡಬೇಕು’ ಎಂದು ವಿವರಿಸಲಾಗಿದೆ.