ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಸ್.ಆರ್.ಪಾಟೀಲ, ‘ಸಚಿವ ಸ್ಥಾನ ಕೈ ತಪ್ಪಿದ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ. ವೈಯಕ್ತಿಕ ಕಾರಣದಿಂದ ಒಂದು ದಿನ ತಡವಾಗಿ ಬಂದು ಅವರನ್ನು ಭೇಟಿ ಮಾಡುತ್ತಿದ್ದೇನೆ. ಸಚಿವ ಸ್ಥಾನಕ್ಕಾಗಿ ಅತೃಪ್ತಿ, ಆಕ್ರೋಶ ವ್ಯಕ್ತಪಡಿಸೊಲ್ಲ. ಅಳೋದು–ಕರೆಯೋದು ಮಾಡೊಲ್ಲ’ ಎಂದು ಹೇಳಿದರು.