ಸಾರ್ವಜನಿಕರ ಆಕ್ರೋಶ: ಕಳೆದ ಎರಡು ತಿಂಗಳಿಂದ ಸಮರ್ಪಕವಾಗಿ ನೀರು ಸಿಗದೆ ಜನರು ಪರದಾಡುತ್ತಿದ್ದು ವಿವಿಧ ವಾರ್ಡ್ಗಳಿಗೆ ಹದಿನೈದು ಇಪ್ಪತ್ತು ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಸಮರ್ಪಕ ನೀರು ಪೂರೈಸುವಂತೆ ಪುರಸಭೆಯ ವಿರುದ್ಧ ಜನರು ಆಕ್ರೋಶಗೊಂಡು ಬೀದಿಗಿಳಿದು ಪ್ರತಿಭಟನೆಯನ್ನು ಸಹ ನಡೆಸಿದ್ದಾರೆ. ಮೋಟಾರ್ ಕೆಟ್ಟಿದೆ. ನೀರು ಶುದ್ಧೀಕರಣವಾಗಿಲ್ಲ ಎಂಬಿತ್ಯಾದಿ ಉತ್ತರಗಳನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಈಗ ಸಾಕಷ್ಟು ನೀರು ಚರಂಡಿ ಪಾಲಾಗಿದ್ದು ಇದಕ್ಕೆ ಯಾರು ಹೊಣೆಗಾರರು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.