ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿಗೆ ಬೆಂಕಿ, ಇಬ್ಬರ ಸಜೀವ ದಹನ

Last Updated 9 ಜೂನ್ 2018, 19:30 IST
ಅಕ್ಷರ ಗಾತ್ರ

ಹಳೇಬೀಡು: ಇಲ್ಲಿಗೆ ಸಮೀಪದ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ ರಾತ್ರಿ ಕಾರೊಂದು ಸುಟ್ಟು ಕರಕಲಾಗಿದ್ದು, ಇಬ್ಬರು ಸಜೀವ ದಹನವಾಗಿದ್ದಾರೆ.

ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ರಂಗನಗುಡ್ಡಪಲ್ಲಿ ನಿವಾಸಿ ಸಂಧ್ಯಾ (35) ಮತ್ತು ಹಾಸನ ಜಿಲ್ಲೆ ಸಮುದ್ರವಳ್ಳಿ ಗ್ರಾಮದ ಗಿರೀಶ (40) ಮೃತಪಟ್ಟವರು.

ಕಾರು ಸುಟ್ಟು ಕರಕಲಾಗಿರುವ ಕಾರಣ ನೋಂದಣಿ ಸಂಖ್ಯೆ ಗೊತ್ತಾಗಿಲ್ಲ. ಕಾರಿನ ಚಾಸಿ ಸಂಖ್ಯೆ ಆಧಾರದಲ್ಲಿ ಮೃತರ ಗುರುತು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಗಿರೀಶ ವಿವಾಹಿತನಾಗಿದ್ದು, ಮೃತ ಸಂಧ್ಯಾ ಅವರ ಪತಿ ಆಭರಣ ವರ್ತಕರು ಎಂದು ತಿಳಿದುಬಂದಿದೆ. ಕಾರು ಗಿರೀಶನಿಗೆ ಸೇರಿದ್ದಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT