ಈ ಕುರಿತು ಮಾತನಾಡಿದ ಸಂಸ್ಥೆಯ ಶ್ರೀಗಳಾದ ಸಿದ್ದಲಿಂಗ ಸ್ವಾಮಿಗಳು, 'ಶಾಲೆಯನ್ನು ದೇವಸ್ಥಾನಗಳಿಗೆ ಹೋಲಿಸುತ್ತೇವೆ, ಆದರೆ ಸ್ವಚ್ಛತೆಗೆ ಮುಂದಾಗುವುದಿಲ್ಲ. ಪರಿಸರದಿಂದ ದೊರಕುವ ಲಾಭಗಳನ್ನು ಇಂದಿನ ಪೀಳಿಗೆಗ ಪ್ರಾತ್ಯಕ್ಷಿಕೆ ಮೂಲಕ ತಿಳಿ ಹೇಳಬೇಕಾಗಿದೆ. ನಮ್ಮ ಜನರಿಗೆ ಗಿಡಗಳನ್ನು ಕಡಿಯುವುದು ಗೊತ್ತು. ಆದರೆ ಬೆಳೆಸುವುದು ಗೊತ್ತಿಲ್ಲ. ಶುದ್ಧವಾದ ಆಮ್ಲಜನಕ ನೀಡುವ ಗಿಡ ಮರಗಳನ್ನು ಬೆಳೆಸುವುದು, ಪೋಷಿ ಸುವುದು ಹಾಗೂ ಸಂರಕ್ಷಿಸುವುದು ನಮ್ಮ ಜೀವನದ ಉಸಿರಾಗಬೇಕು ಎಂದರು.