1988ರಲ್ಲಿ ಕಾನ್ಸ್ಟೆಬಲ್ ಆಗಿ ಇಲಾಖೆಗೆ ಸೇರಿದ ರಾಚಯ್ಯಸ್ವಾಮಿ, ಅವಕಾಶ ಸಿಕ್ಕಾಗ ಮಠ, ಮಂದಿರಗಳಲ್ಲಿ ನಡೆಯುವ ಭಜನೆ, ಕೀರ್ತನೆ, ಪುರಾಣ ಕಾರ್ಯಕ್ರಮಗಳಲ್ಲಿ ತಬಲಾ ಸಾಥ್ ನೀಡುತ್ತಿದ್ದರು.
ಜನರನ್ನು ಬೆದರಿಸುವುದು ಮಾತ್ರ ಪೊಲೀಸರಿಗೆ ಗೊತ್ತು ಎಂಬ ಅಭಿಪ್ರಾಯಕ್ಕೆ ಅವರು ಸಂಪೂರ್ಣ ತದ್ವಿರುದ್ಧ. ಪೊಲೀಸ್ ಇಲಾಖೆಯಲ್ಲಿಯೂ ಕವಿಗಳು, ಸಾಹಿತಿಗಳು, ಕಲಾವಿದರು ಇದ್ದಾರೆ. ಅವರ ಸಾಲಿನಲ್ಲಿ ನಿಲ್ಲುತ್ತಾರೆ ರಾಚಯ್ಯಸ್ವಾಮಿ.