ಶನಿವಾರ ಮುಂಜಾನೆಯಿಂದ ಆಗಾಗ ಸುರಿಯುವ ಜಿಟಿಜಿಟಿ ಮಳೆಯಿಂದಾಗಿ, ದಹನ ಕಾರ್ಯಕ್ಕೆ ಅಡ್ಡಿಯಾಗುವಂತಾಗಿತ್ತು. ಮೃತರ ಕುಟುಂಬ ಸದಸ್ಯರು, ಸಾರ್ವಜನಿಕರು ಹಾಗೂ ಪರಸ್ಥಳದಿಂದ ಬಂದ ಆಪ್ತರ ಮಧ್ಯೆ, ‘ಪುರಸಭೆಗೆ ಏನಾಗಿದೆ ಧಾಡಿ. ನಾಳೆ ಅವರು ಸತ್ತರೆ ಅವರ ಕಳೇಬರವೂ ಇಲ್ಲಿಗೇ ಬರುವುದೆಂಬ ಸಾಮಾನ್ಯ ಜ್ಞಾನವಿಲ್ಲವೇ. ಬನ್ನಿ ನಮ್ಮೂರಿನ ಸ್ಮಶಾನ ನೋಡಿ’ ಎಂಬ ಮಾತುಗಳೂ ಕೇಳಿ ಬಂದವು.