ನೀರು ಬಂದಿರುವುದರಿಂದ ಕೆಂಗಲ್ಲ, ಕಜಗಲ್ಲ, ವರಗೊಡದಿನ್ನಿ,ಹೂವನೂರ, ನಂದನೂರ, ಗಂಜಿಹಾಳ, ಕೈರವಾಡಗಿ, ಪಾಪತನಾಳ, ಬೆಳಗಲ್ಲ, ಬಿಸನಾಳಕೊಪ್ಪ,ಇದ್ದಲಗಿ, ಅಡವಿಹಾಳ, ಎಮ್ಮೆಟ್ಟಿ ಗ್ರಾಮಸ್ಥರು ಹಾಗೂ ರೈತರು ಸಂತಸಗೊಂಡಿದ್ದಾರೆ. ಸ್ಥಗಿತಗೊಂಡಿದ್ದ ಒಳನಾಡು ಮತ್ತು ಬಂದರು ಇಲಾಖೆ ಅಧಿಕಾರಿಗಳು ಕೂಡಲಸಂಗಮ- ಅಡವಿಹಾಳ, ಕೂಡಲಸಂಗಮ -ಕುಂಚಗನೂರ ದೋಣಿ ಸಂಚಾರ ಮತ್ತೆ ಆರಂಭಿಸಿದರು. ಕೂಡಲಸಂಗಮಕ್ಕೆ ಬರುವ ಪ್ರವಾಸಿಗರು, ಭಕ್ತರು ನದಿ ತಟದಲ್ಲಿ ಸ್ನಾನ, ಭೋಜನ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.