'ಔರಾದ್ ಹಿಂದುಳಿದ ತಾಲ್ಲೂಕು ಆಗಿದ್ದು, ಇಲ್ಲಿ ಬಡವರು ಮತ್ತು ಕೂಲಿಕಾರ್ಮಿಕರು ಹೆಚ್ಚಿದ್ದಾರೆ. ಸೋಮವಾರದ ಸಂತೆ ದಿನ ತಾಲ್ಲೂಕಿನ ವಿವಿಧ ಊರುಗಳಿಂದ ಪಟ್ಟಣಕ್ಕೆ ಸಾಕಷ್ಟು ಸಂಖ್ಯೆ ಜನ ಬರುತ್ತಾರೆ. ಕೆಲವರಿಗೆ ದುಬಾರಿ ಹಣ ಕೊಟ್ಟು ಹೋಟೆಲ್ನಲ್ಲಿ ಊಟ ಮಾಡಲು ಆಗುವುದಿಲ್ಲ. ಈ ಕಾರಣ ವೃದ್ಧರು ಮತ್ತು ಅನಾಥರು ಅಮರೇಶ್ವರ ದೇವಸ್ಥಾನದ ದಾಸೋಹದಲ್ಲಿ ಊಟ ಮಾಡುತ್ತಾರೆ. ಸರ್ಕಾರವು ಇಂದಿರಾ ಕ್ಯಾಂಟಿನ್ ಆರಂಭಿಸಿದರೆ ಎಲ್ಲ ಜನರಿಗೆ ಅನುಕೂಲ ಆಗುತ್ತದೆ. ಆದರೆ ಕ್ಯಾಂಟಿನ್ ಕಟ್ಟಡ ಕೆಲಸ ಮುಗಿದರೂ ಊಟ ಮತ್ತು ಉಪಹಾರ ವ್ಯವಸ್ಥೆ ಮಾಡಲು ವಿನಾ ಕಾರಣ ವಿಳಂಬ ಮಾಡಲಾಗುತ್ತಿದೆ' ಎಂದು ನಿರುದ್ಯೋಗಿ ಪದವೀಧರ ಸಂಘದ ಅಧ್ಯಕ್ಷ ಸಂಜುಕುಮಾರ ಮೇತ್ರೆ ತಿಳಿಸಿದರು.