ಹಳಗನ್ನಡ ಸಮ್ಮೇಳನ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಲೇ, ಕರ್ನಾಟಕ ಗಮಕ ಕಲಾಪರಿಷತ್ತು, ಸಮ್ಮೇಳನದ ರೂವಾರಿಗಳನ್ನು ಸಂಪರ್ಕಿಸಿತ್ತು. ‘ಗಮಕ ಕಲೆಯ ಬಗ್ಗೆ ಒಂದು ಗೋಷ್ಠಿ ಹಾಗೂ ಗಮಕ ವಾಚನಕ್ಕೆ ಅವಕಾಶವನ್ನು ಕೊಡಬೇಕು’ ಎಂದು ಮನವಿಯನ್ನೂ ಅರ್ಪಿಸಿತ್ತು. ಆದರೆ ಸಾಹಿತ್ಯ ಪರಿಷತ್ತು ಈ ಬಗ್ಗೆ ನಿರ್ಲಕ್ಷ್ಯ ತಾಳಿತು. ಸಮ್ಮೇಳನದ ಕವಿಗೋಷ್ಠಿಯಲ್ಲಿ 16 ಕವಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅವರೆಲ್ಲಾ ಹಳಗನ್ನಡದಲ್ಲಿ ಕಾವ್ಯ ಓದುತ್ತಾರೇನು? ಅಲ್ಲಿ ಪ್ರದರ್ಶನವಾಗಲಿರುವ ನಾಟಕ ಹಳಗನ್ನಡದಲ್ಲಿ ಇದೆಯೇನು? ಇವರೆಲ್ಲರ ದೃಷ್ಟಿಯಲ್ಲಿ ಗಮಕ ಕಲೆ ಅನಾಥ ಶಿಶುವೇ?