ಬೆಡಸಗಾಂವ್, ಕೂರ್ಲಿ ಭಾಗದಲ್ಲಿ ತೆನೆ ಬಿಡುವ ಹಂತದಲ್ಲಿದ್ದ ಪೈರನ್ನು ತಿಂದಿವೆ.ಬೆಡಸಗಾಂವ್ ಗ್ರಾಮದ ಬಸಮ್ಮ ಗಣಪತಿ ನಾಯ್ಕ, ಗಣಪತಿ ಮಂಚ ನಾಯ್ಕ, ಬಂಗಾರಿ ಮಂಚ ನಾಯ್ಕ ಸೇರಿದಂತೆ ಆರೇಳು ರೈತರ ಬೆಳೆಗಳು ಕಾಡುಕೋಣಗಳಿಂದ ಹಾನಿಯಾಗಿವೆ. ಕೆಲವು ಗದ್ದೆಗಳಲ್ಲಿ ಬೆಳೆ ಕಟಾವು ಹಂತಕ್ಕೆ ಬಂದಿದ್ದರೆ, ಮತ್ತೆ ಕೆಲವೆಡೆತೆನೆ ಬಿಡುವ ಹಂತದಲ್ಲಿತ್ತು.