ಕೆರೆ ಹೂಳೆತ್ತುವುದು, ಸೈಡ್ ವಾಲ್ ನಿರ್ಮಾಣ, ಕೆರೆ ಏರಿ ಅಭಿವೃದ್ಧಿ, ಕಾಲುವೆ ನಿರ್ಮಾಣ ಮತ್ತು ಕೆರೆ ಕೋಡಿ ಬಿದ್ದಾಗ ಹೋಗಲು ಚರಂಡಿ ನಿರ್ಮಾಣ ಸೇರಿ ಹಲವು ಕಾಮಗಾರಿಗಳು ಅಂದಾಜು ಪಟ್ಟಿಯಲ್ಲಿದೆ. ಆದರೆ, ಇದು ಆಗದೇ ಶೇ 50ರಷ್ಟು ಬಿಲ್ ಗುತ್ತಿಗೆದಾರರ ಜೇಬು ಸೇರಿದೆ ಎಂದು ಹಿರೇಮಠದ ಬಸವರಾಜಪ್ಪ ಆರೋಪಿಸಿದರು.