‘ಅವರು ಬಂಗಲೆಯಲ್ಲಿದ್ದ ವಸ್ತುಗಳ ಪಟ್ಟಿಯನ್ನು ಪರಿಶೀಲಿಸಿ, ನಾನು ಯಾವ ವಸ್ತುಗಳನ್ನು ತೆಗೆದುಕೊಂಡಿದ್ದೇನೆ ಎನ್ನುವುದನ್ನು ಹೇಳಲಿ. ತಕ್ಷಣವೇ ಅವುಗಳನ್ನು ಹಿಂದಿರುಗಿಸುತ್ತೇನೆ. ಬಂಗಲೆಗಾಗಿ ನಾನು ₹42 ಕೋಟಿ ವೆಚ್ಚ ಮಾಡಿದ್ದೇನೆ, ಅಲ್ಲಿದ್ದ ಈಜುಕೊಳವನ್ನು ಬಂಗಲೆ ತೆರವುಗೊಳಿಸುವ ಮೊದಲು ಮುಚ್ಚಿಹಾಕಿದ್ದೇನೆ ಎಂದೆಲ್ಲಾ ಕೆಲವರು ಹೇಳುತ್ತಿದ್ದಾರೆ. ನಾನು ಪುನಃ ಅಲ್ಲಿಗೆ ಹೋಗಲು ಸಿದ್ಧನಿದ್ದೇನೆ. ಈಜುಕೊಳ ಎಲ್ಲಿದೆ ಎಂದು ನನಗೆ ತೋರಿಸಲಿ. ವರದಿಗಾಗಿ ಕಾಯುತ್ತಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆಕ್ರೋಶಭರಿತರಾಗಿ ಹೇಳಿದ್ದಾರೆ.