ಜಗದೀಶ ಶೆಟ್ಟರ್ ಅವರು ಅನುಭವಿ ರಾಜಕಾರಣಿ. ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಗಾಂಭೀರ್ಯವನ್ನು ಉಳಿಸಿಕೊಂಡು ಬಂದಿರುವಂಥವರು. ಕರ್ನಾಟಕ ಸರ್ಕಾರದ ಹೊಸ ಸಚಿವ ಸಂಪುಟದಲ್ಲಿ ಜಿ.ಟಿ .ದೇವೇಗೌಡರು ಉನ್ನತ ಶಿಕ್ಷಣದ ಸಚಿವರಾಗಿದ್ದಕ್ಕೆ ‘ದೇವೇಗೌಡರು ಕೇವಲ ಎಂಟನೇ ತರಗತಿ ಓದಿರುವುದು. ಇಂತಹವರು ಉನ್ನತ ಶಿಕ್ಷಣದ ಸಚಿವರಾಗಲು ಯಾವ ಅರ್ಹತೆ ಇದೆ, ಅಂತಹವರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಡಬಲ್ ಡಿಗ್ರಿ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಏನು ತಾನೇ ಮಾತನಾಡುತ್ತಾರೆ’ ಎಂದು ಇತ್ತೀಚೆಗೆ ಅವರು ಪ್ರಶ್ನಿಸಿರುವುದನ್ನು ಪತ್ರಿಕೆಗಳಲ್ಲಿ ಓದಿ ಗಾಬರಿಯಾಯಿತು.